Dinesh holla Numerologist, Saligrama, Udupi - ವಿಮಾನ ಅಪಘಾತ ಮತ್ತು ಸಂಖ್ಯಾಶಾತ್ರ
ಅಜಿತ್ ಪವಾರ್ ರವರ ವಿಮಾನ ಅಪಘಾತ/ದುರ್ಮರಣ ವನ್ನು ಸಂಖ್ಯಾಶಾತ್ರ ದೃಷ್ಟಿಯಿಂದ ನೋಡೋಣ . .ಸಂಖ್ಯೆಗಳು ಏನು ಹೇಳುತ್ತಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ . . ಅವರ ಜನ್ಮದಿನ 22-july-1959, ಅಂದರೆ ಅವರ ಮೂಲಾಂಕ ನಾಲ್ಕು (ರಾಹು) ಹಾಗು ಭಾಗ್ಯಾಂಕ ಎಂಟು (ಶನಿ ) ಇಂತಹ ಕಾಂಬಿನೇಶನ್ ಇರುವವರು ಬಹಳ ಶಿಸ್ತಿನ ಹಾಗು ವಕೀಲರಂತಹ ವಾಕ್ ಚತುರತೆ ಇರುತ್ತದೆ . . ಇವರು ಸಾಮಾನ್ಯವಾಗಿ ಸರಕಾರೀ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಪದವಿಯಲ್ಲಿರುತ್ತಾರೆ . . ಇದೆಲ್ಲವೂ ಶನಿಯ ಕೊಡುಗೆ . . ಕಟು ನಿರ್ಧಾರ ಹಾಗು ಮೊನಚು ಮಾತು ಇವರ ಆಯುಧ,, ಮಾತುಗಳು ಸೌಮ್ಯವಾಗಿದ್ದರೂ ತೂಕದಿಂದ ಕೂಡಿರುತ್ತವೆ . . ಇವರ ಜನ್ಮದಿನವನ್ನು ಗಮನಿಸಿ ಅದರಲ್ಲಿ ನಾಲ್ಕು , ಆರು , ಮತ್ತು ಮೂರು ನೇರವಾಗಿ ಸಿಗುತ್ತಿಲ್ಲ . . ಅಂದರೆ ಆ ಏರಿಯಾದಲ್ಲೇ ಅವರ ವೀಕ್ನೆಸ್ ಇರುತ್ತೆ . . ಅಂದರೆ ರಾಹು , ಗುರು ಮತ್ತು ಶುಕ್ರ . . ಈಗ ಅಪಘಾತವಾದ ವರ್ಷದ ಎನರ್ಜಿ ಏನಿತ್ತು ಅಂತ ನೋಡೋಣ . . 28-jan-2026 ರಂದು ಅಪಘಾತ ನಡೆಯಿತು! ಈ ವರ್ಷ ಇವರ ಪರ್ಸನಲ್ ಇಯರ್ ಮೂರು ಅಂದರೆ ವೇದಿಕ್ ನಲ್ಲಿ ಗುರು ಭುಕ್ತಿ ಅಂತ ಇಟ್ಟುಕೊಳ್ಳೋಣ . . ಆ ಮೂರರ ಎನರ್ಜಿಯನ್ನು ಸರಿತೂಗಿಸಲು ಇವರ ಚಾರ್ಟಲ್ಲಿ ಮೂರು ಇಲ್ಲ ! ಹಾಗೆ ವರ್ಷದ ಸಂಖ್ಯೆಯಲ್ಲಿ ಬರುವ ಆರು ಅಂದರೆ ಶುಕ್ರ ಲಕ್ಸುರಿಕಾರಕ ವಿಮಾನಯಾನ ಕೂಡ ಇದರ ಪರಿಧಿಯೊಳಗೆ ಬರುತ್ತೆ . . ಶುಕ್ರನ ಎನೆರ್ಜಿಯನ್ನು ಹ್ಯಾಂಡಲ್ ಮಾಡುವ ಶಕ್ತಿ ...